
ಮಂಗಳೂರು / ಅತ್ತಾವರ : ನಾಲ್ಕು ವರ್ಷಗಳ ಹಿಂದೆ ಪೂಣೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮೂಲತಹ ಮಂಗಳೂರು ನಿವಾಸಿ ಡಾ| ಜೇಷಾ ರಿಮಿನ್ ರವರ ಚತುರ್ಥ ವರ್ಷದ ಪುಣ್ಯಸ್ಮರಣೆಯ ಪ್ರಯುಕ್ತ ರಕ್ತದಾನ ಶಿಬಿರವನ್ನು ತಾ| 11-09-2026ರಂದು ರೈಲ್ವೆ ಸ್ಟೇಷನ್ ರಸ್ತೆ ಅತ್ತಾವರ ಮಂಗಳೂರು ಇಲ್ಲಿನ ರಿಸರ್ವೆಷನ್ ಕೌಂಟರ್ ಮುಂಭಾಗವಿರುವ ಮಂಗಳೂರು ಕೊಂಕಣ ರೈಲ್ವೆ ಅಫೀಸಿ (KRIST) ನಲ್ಲಿ ಅಯೋಜಿಸಲಾಗಿತ್ತು.
ಶಿಬಿರವನ್ನು ಮಂಗಳೂರು ರೈಲು ನಿಲ್ದಾಣದ ರಿಕ್ಷಾ ಚಾಲಕರ ಹಾಗೂ ಮಾಲಕರ ಸಹಕಾರದೊಂದಿಗೆ ಡಾ| ಜೇಷಾ ರಿಮಿನ್ ರವರ ಪೋಷಕರಾದ ಶ್ರೀಮತಿ ಮತ್ತು ಶ್ರೀ ಜೋನ್ ಥೋಮಸ್ ಹಾಗೂ ಶ್ರೀ ಜೇಷು ಜಾನ್ ಇವರು ಅಯೋಜನೆ ಮಾಡಿದ್ದರು.
ಶಿಬಿರದಲ್ಲಿ 40ಕ್ಕೂ ಹೆಚ್ಚು ದಾನಿಗಳು ಭಾಗವಹಿಸಿ ರಕ್ತದಾನ ಮಾಡಿದರು.
ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿ ಹಾಗೂ ಎಚ್ ಓ ಡಿ ರಕ್ತನಿಧಿ ಡಾ| ಶರತ್ ಇವರ ಉಪಸ್ಥಿತಿಯಲ್ಲಿ ಬ್ಲಡ್ ಬ್ಯಾಂಕ್ ನ ಉಸ್ತುವಾರಿಗಳಾದ ಅಶೋಕ್ ಕುಮಾರ್ ರವರ ನೇತ್ರತ್ವದಲ್ಲಿ ನಡೆದ ಈ ಶಿಬಿರದಲ್ಲಿ. ವೆನ್ಲಾಕ್ ಆಸ್ಪತ್ರೆಯ ಸಿಬ್ಬಂದಿಗಳು ಸಹಕರಿಸಿದರು.
ಶಿಬಿರ ಸಂಘಟನೆಯ ಪ್ರಮುಖರಾದ ರಿಮಿನ್, ಸುನಿಲ್ ಹಾಗೂ ಮ್ಯಾಥ್ಯೂಸ್ ಉಪಸ್ಥಿತರಿದ್ದರು.
_Sathish Kapikad



