
ಮಂಗಳೂರು, ಸೆಪ್ಟೆಂಬರ್ 1, 2026: ಇಸ್ಕಾನ್ ಮಂಗಳೂರು ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ 2026 ಅನ್ನು ಸೆಪ್ಟೆಂಬರ್ 3 ಮತ್ತು 4ರಂದು ಸ್ಕೌಟ್ಸ್ ಭವನ, ಪಿಲಿಕುಳದಲ್ಲಿ ಅದ್ಧೂರಿಯಾಗಿ ಆಚರಿಸಲಾಗುವುದು. ಇಸ್ಕಾನ್ ಪಿವಿಎಸ್ ಕಲಾಕುಂಜ್ ವತಿಯಿಂದ ಆಯೋಜಿಸಲಾಗಿರುವ ಈ ಎರಡು ದಿನಗಳ ಆಚರಣೆಯು ಭಕ್ತರು, ಕುಟುಂಬಗಳು, ಯುವಜನತೆ ಮತ್ತು ಸಾರ್ವಜನಿಕರನ್ನು ಆಧ್ಯಾತ್ಮಿಕ, ಭಕ್ತಿಮಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸರಣಿಗಾಗಿ ಒಂದೆಡೆ ಸೇರಿಸಲಿದೆ ಎಂದು ಇಸ್ಕಾನ್ ಮಂಗಳೂರು ಇದರ ಅಧ್ಯಕ್ಷರಾದ ಗುಣಾಕಾರ ರಾಮಾ ದಾಸ ಇವರು ಮಾಹಿತಿ ನೀಡಿದರು.

ಕೊಡಿಯಾಲ್ ಬೈಲ್ ನಲ್ಲಿರುವ ಇಸ್ಕಾನ್ ಮಂದಿರದಲ್ಲಿ ಇಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರ, ಆಚರಣೆಯು ಸಾಂಪ್ರದಾಯಿಕ ಪೂಜೆ ಮತ್ತು ಭಕ್ತಿಮಯ ಕಾರ್ಯಕ್ರಮಗಳಾದ ಶ್ರೀ ಶ್ರೀ ಕೃಷ್ಣ ಬಲರಾಮ ಮಂಗಲಾರತಿ, ಶೃಂಗಾರ ಆರತಿ, ಪುಷ್ಪಾಂಜಲಿ ಸೇವೆ ಮತ್ತು ಜೂಲನ್ ಸೇವೆಗಳೊಂದಿಗೆ ಪ್ರಾರಂಭವಾಗಲಿದೆ. ಭಗವಾನ್ ಶ್ರೀ ಕೃಷ್ಣನ ಶುಭ ಅವತರಣ ದಿನವನ್ನು ಗುರುತಿಸಲು ವಿಶೇಷ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿದೆ ಎಂದರು.
ಈ ವರ್ಷದ ಆಚರಣೆಯ ಪ್ರಮುಖ ಆಕರ್ಷಣೆಗಳು:
- ಶ್ರೀ ಕೃಷ್ಣ ವೈಭವಂ – ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಳ್ವಾಸ್ ವತಿಯಿಂದ ಆಯೋಜಿಸಲಾಗಿದ್ದು, ಭಾರತದ ಶ್ರೀಮಂತ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಲಿದೆ.
- ಅಂತರಾಷ್ಟ್ರೀಯ ಭಜನ್ ಕ್ಲಬ್ಬಿಂಗ್, ಇದು ಭಕ್ತಿಮಯ ಸಂಗೀತ, ಜಪ ಮತ್ತು ಸಂಭ್ರಮದ ವಾತಾವರಣವನ್ನು ಸೃಷ್ಟಿಸಲಿದೆ.
- ಕೃಷ್ಣ ರಸ ಬಜಾರ್, ಮಂಗಳೂರಿನ 20ಕ್ಕೂ ಹೆಚ್ಚು ಮೆಚ್ಚಿನ ಬ್ರ್ಯಾಂಡ್ಗಳಿಂದ ಆಯೋಜಿಸಲಾದ ಆಹಾರ ಉತ್ಸವ.
- ಕೃಷ್ಣನಿಗಾಗಿ ವ್ಲಾಗ್,
- ಮಂಗಳೂರು ಯುವ ಉತ್ಸವ, 2000ಕ್ಕೂ ಹೆಚ್ಚು ಯುವ ಮಂಗಳೂರಿಗರು ಭಾಗವಹಿಸಲಿರುವ ಯುವ ಉತ್ಸವ.
- ಎಲ್ಲಾ ವಯೋಮಾನದ ಗುಂಪುಗಳಿಗಾಗಿ ಮಕ್ಕಳ ಸ್ಪರ್ಧೆ.

ಆಚರಣೆಯು ಸೆಪ್ಟೆಂಬರ್ 4ರಂದು ರಾತ್ರಿ 9 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ನಡೆಯುವ ಭವ್ಯ ಶ್ರೀ ಕೃಷ್ಣ ಬಲರಾಮ ಮಹಾ ಅಭಿಷೇಕದೊಂದಿಗೆ ಸಮಾಪನಗೊಳ್ಳಲಿದೆ.ಭಕ್ತರು ಮತ್ತು ಸಾರ್ವಜನಿಕರು ಆಚರಣೆಯ ಸಂದರ್ಭದಲ್ಲಿ ನಿಗದಿಪಡಿಸಲಾದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು.
ಭಕ್ತರು ಮತ್ತು ಸಂದರ್ಶಕರ ಭಾಗವಹಿಸುವಿಕೆಗೆ ಅನುಕೂಲವಾಗುವಂತೆ, ಇಸ್ಕಾನ್ ಪಿವಿಎಸ್ ಕಲಾಕುಂಜ್ನಿಂದ ಸ್ಕೌಟ್ಸ್ ಭವನ, ಪಿಲಿಕುಳಕ್ಕೆ ಉಚಿತ ಬಸ್ ಸಾರಿಗೆ ವ್ಯವಸ್ಥೆ ಲಭ್ಯವಿರುತ್ತದೆ. ಇಸ್ಕಾನ್ ಮಂಗಳೂರು ವತಿಯಿಂದ ಭಕ್ತರು, ಕುಟುಂಬಗಳು, ಯುವಜನತೆ ಮತ್ತು ಸಾರ್ವಜನಿಕರು ಈ ಆಚರಣೆಯಲ್ಲಿ ಭಾಗವಹಿಸಿ ಕೃಷ್ಣನ ಆಶೀರ್ವಾದವನ್ನು ಪಡೆಯುವಂತೆ ಮನವಿ ಮಾಡಲಾಗಿದೆ.

ಸ್ಥಳ: ಸ್ಕೌಟ್ಸ್ ಭವನ, ಪಿಲಿಕುಳ, ಮಂಗಳೂರು
ದಿನಾಂಕ: ಸೆಪ್ಟೆಂಬರ್ 3 ಮತ್ತು 4, 2026
ಸಂಪರ್ಕ: 82962 07108
ವೆಬ್ಸೈಟ್: iskconmangalore.org
ಪತ್ರಿಕಾಗೋಷ್ಠಿಯಲ್ಲಿ ಶ್ರೀ ನಂದನಾಚಾರ್ಯ ದಾಸ, ಇಸ್ಕಾನ್, ಮಂಗಳೂರು ಹಾಗೂ ಶ್ರೀ ಸುಂದರ ಗೌರ ದಾಸ, ಇಸ್ಕಾನ್, ಮಂಗಳೂರು ಉಪಸ್ಥಿತರಿದ್ದರು.
_Sathish Kapikad



