
ಮಂಗಳೂರು, ಫೆಬ್ರವರಿ, 06 : ನಗರದಲ್ಲಿ ಲ್ಯಾಂಡ್ ಲಿಂಕ್ಸ್ ಟೌನ್ ಶಿಪ್ ನಿರ್ಮಿಸುವ ಮೂಲಕ ಮಂಗಳೂರಿಗೆ ರಿಚ್ ಲುಕ್ ಬರುವ ಹಾಗೆ ಮಾಡಿದ್ದು ಮಾತ್ರವಲ್ಲದೇ ರಾಜಕೀಯ ಕ್ಷೇತ್ರ, ಶಿಕ್ಷಣ ಕ್ಷೇತ್ರ, ಧಾರ್ಮಿಕ ಕ್ಷೇತ್ರ ಮುಂತಾದ ಹಲವಾರು ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿರುವ ನಗರದ ಖ್ಯಾತ ಉದ್ಯಮಿ ಹಾಗೂ ಮಾಜಿ ಸಚಿವ ಶ್ರೀ ಜೆ .ಕೃಷ್ಣ ಪಾಲೇಮಾರ್ ಅವರು ಇದೀಗ ಮಂಗಳೂರು ನಗರದ ಮೇರಿಹಿಲ್ನ ಹೆಲಿಪ್ಯಾಡ್ ಸಮೀಪ ಅದ್ಧೂರಿ ಶೈಲಿಯಲ್ಲಿ ನೂತನವಾಗಿ “ಪಾಲೆಮಾರ್ ಕನ್ವೆನ್ಷನ್ ಸೆಂಟರ್” ನಿರ್ಮಿಸಿ ಮಂಗಳೂರಿನ ರಿಚನೆಸ್ಗೆ ಕಲಸವನ್ನು ಇಡುವ ಹಾಗೆ ವೈಭವೋಪೇತ ಕೊಡುಗೆಯನ್ನು ನೀಡಿದ್ದಾರೆ.

ಲ್ಯಾಂಡ್ ಲಿಂಕ್ಸ್ ಸಂಸ್ಥೆ ಮಾಲಿಕರಾದಂತಹ ಮಾಜಿ ಸಚಿವ ಶ್ರೀ ಜೆ .ಕೃಷ್ಣ ಪಾಲೇಮಾರ್ ಅವರು ನಗರಕ್ಕೆ ಉತ್ತಮವಾದಂತಹ ಶ್ರೀಮಂತಿಕೆಯ ಕುರುಹುಗಳನ್ನು ಒಳಗೊಂಡ ಅಧುನಿಕ ವ್ಯವಸ್ಥೆಗಳನ್ನು ಹೊಂದಿರುವಂತಹ ಸಭಾಭವನಗಳ ಅಗತ್ಯತೆಯನ್ನು ಮನಗಂಡು, ಯೋಜನೆ ರೂಪಿಸಿ ಅತೀ ಶ್ರೀಮಂತರ ಜೊತೆ ಸಾಮಾನ್ಯ ಜನರಿಗೂ ಉಪಯೋಗವಾಗುವಂತೆ ಮತ್ತು ಯಾರೊಬ್ಬರಿಗೂ ಸಮಸೈಯಾಗದ ರೀತಿಯಲ್ಲಿ ಎಲ್ಲಾ ಸವಲತ್ತುಗಳನ್ನು ಒಳಗೊಂಡಂತೆ ನಿರ್ಮಿಸಲಾಗಿರುವ ಈ ಅಧುನಿಕ ಕನ್ವೆನ್ಷನ್ ಹಾಲ್ ಹಲವು ವೈವಿಧ್ಯತೆಗಳನ್ನು ಹೊಂದಿದೆ. ಈ ಅಧುನಿಕ ಹಾಲ್ನಲ್ಲಿ ಶ್ರೀಸಾಮಾನ್ಯರಿಗೆಂದೇ ಸುಮಾರು 500 ಜನರ ಸಾಮರ್ಥ್ಯ ಇರುವಂತಹ ಅತ್ಯುತ್ತಮವಾದ ಸಂಪೂರ್ಣ ಹವಾನಿಯಂತ್ರಿತವಾದ ಸಭಾಭವನವನ್ನು ಕೂಡ ನಿರ್ಮಿಸಲಾಗಿದೆ.

ಸುಮಾರು 8 ಎಕ್ರೆ ಜಾಗದ ವಿಸ್ತಿರ್ಣದಲ್ಲಿ ಸುಮಾರು 80 ಕೋಟಿ ಬಂಡವಾಳದೊಂದಿಗೆ ತಲೆ್ಯೆತ್ತಿ ನಿಂತಿರುವ ಈ ಕನ್ವೆನ್ಷನ್ ಹಾಲ್ ಕಟ್ಟಡಕ್ಕೆ ಐದು ಕಡೆಯಿಂದ ರಸ್ತೆ ಸಂಪರ್ಕ ಇದೆ. ಹಾಗಾಗಿ ಇಲ್ಲಿ ಎಷ್ಟೇ ದೊಡ್ಡ ಕಾರ್ಯಕ್ರಮ ನಡೆದರೂ ಟ್ರಾಫಿಕ್ ಸಮಸೈ ಉದ್ಭವಿಸದು. ಇಲ್ಲಿ ಸರಿ ಸುಮಾರು 9000ಕ್ಕೂ ಹೆಚ್ಚು ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅತ್ಯಂತ ಸುಂದರ ಹಾಗೂ ವೈಭವಯುತವಾಗಿ ನಿರ್ಮಿಸಲಾಗಿರುವ ಈ ಒಂದು ಭವ್ಯವಾದ ಕಟ್ಟಡ ಮಂಗಳೂರು ನಗರದ ಶ್ರೀಮಂತಿಕೆಗೆ ಮತ್ತೊಂದು ಕಲಸ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.
ನಾಳೆ ಶ್ರೀ ದೇವಿಮಹಾತ್ಮೆ : ಯಕ್ಷಗಾನ
ನೂತನ “ಪಾಲೆಮಾರ್ ಕನ್ವೆನ್ಷನ್ ಸೆಂಟರ್” ಶುಭಾರಂಭದ ಹಿನ್ನೆಲೆಯಲ್ಲಿ ಕಟೀಲು ಶ್ರೀ ದುರ್ಗಾಪರಮೆಶ್ವರಿ ದಶಾವತಾರ ಯಕ್ಷಗಾನ ಮಂಡಳಿಯವರು ನಡೆಸಿಕೊಡುವ “ಶ್ರೀ ದೇವಿಮಹಾತ್ಮೆ” ಎಂಬ ಪುಣ್ಯ ಕಥಾಭಾಗವು ನಾಳೆ ದಿನಾಂಕ 07-02-2026 ರ ಶನಿವಾರ ಸಂಜೆ 6.15 ಕ್ಕೆ ಈ ಅಧುನಿಕ ಕನ್ವೆನ್ಷನ್ ಹಾಲ್ನಲ್ಲಿ ನೇರವೆರಲಿರುವುದು. 6 .15ಕ್ಕೆ ಚೌಕಿ ಪೂಜೆ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಾಗಿಗಳಾಗಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಕರ್ನಾಟಕ ಸರಕಾರದ ಮಾಜಿ ಸಚಿವರು ಅಗಿರುವ ಶ್ರೀ ಜೆ .ಕೃಷ್ಣ ಪಾಲೇಮಾರ್ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


